ದತ್ತಿ ಕಾರ್ಯಗಳು
ತಾಯ್ನಾಡಿನಿಂದಲೇ ಆರಂಭವಾಗುತ್ತವೆ

ವೆಂಟನಾ ಫೌಂಡೇಶನ್, ಇದನ್ನು ಸಮಾಜಮುಖಿ ಕಾರ್ಯಗಳಿಗಾಗಿ, ರೋಬೋಸಾಫ್ಟ್ ಟೆಕ್ನಾಲಜೀಸ್ ಮತ್ತು 99ಗೇಮ್ಸ್ ಸ್ಥಾಪಕರಾದ ಶ್ರೀ ರೋಹಿತ್ ಭಟ್ ತಮ್ಮ ಸಮಾನ ಮನಸ್ಕ ಸಹೋದ್ಯೋಗಿಗಳೊಂದಿಗೆ 2022 ರಲ್ಲಿ ಸ್ಥಾಪಿಸಿದರು. ಇದೊಂದು ಲಾಭ-ರಹಿತ ಸಂಸ್ಥೆಯಾಗಿದ್ದು, ನಾವು 'ಜಗತ್ತಿನ ಮೇಲೆ ಶಾಶ್ವತ ಪ್ರಭಾವ ಬೀರುವ ಉದಾತ್ತ ಕಾರ್ಯಗಳು ಸಣ್ಣ ಆರಂಭ ಹೊಂದಿವೆ' ಎಂಬುದರ ಮೇಲೆ ನಂಬಿಕೆಯಿರಿಸಿದ್ದೇವೆ. ಇಲ್ಲಿ ಸಣ್ಣ ಆರಂಭ ಅಂದರೆ ನಮ್ಮ ಸಣ್ಣ ಪಟ್ಟಣವಾದ ಉಡುಪಿಯಿಂದ ಎಂದರ್ಥ. ಇಲ್ಲಿ ನಾವು ಜೀವನದ ಎಲ್ಲಾ ಸ್ತರದ ಜನರನ್ನು ಭೇಟಿಯಾಗಿದ್ದೇವೆ, ವಿಭಿನ್ನ ಸಂಸ್ಕೃತಿಗಳಿಗೆ ಸಾಕ್ಷಿಯಾಗಿದ್ದೇವೆ, ಮತ್ತು ಜಗತ್ತಿನಾದ್ಯಂತ ಕ್ಷೀಣಿಸುತ್ತಿರುವ ಪ್ರಶಾಂತವಾದ ಹಸಿರು ಪ್ರಕೃತಿಯನ್ನು ಆನಂದಿಸುತ್ತೇವೆ.

ತಂತ್ರಜ್ಞಾನದ ಮೂಲಕ ಈಗಾಗಲೇ ಯಶಸ್ಸು ಸಾಧಿಸಿರುವ ನಮ್ಮ ಸಂಸ್ಥಾಪಕರಿಗೆ, ಜಾಗತಿಕ ಪ್ರವೃತ್ತಿಯನ್ನು ತಲುಪುವ ಗುರಿಯಲ್ಲಿರುವಾಗ ಸಮಾಜವು ಸಂಸ್ಕೃತಿ, ಪರಂಪರೆ ಮತ್ತು ಪರಿಸರವನ್ನು ಮರೆತುಬಿಡುತ್ತದೆ ಎಂಬ ಅರಿವಿತ್ತು. ಭವಿಷ್ಯದ ದಿನಗಳಿಗೆ ಡಿಜಿಟಲ್ ಜಗತ್ತಿನ ಅವಕಾಶದ ಬಾಗಿಲು ತೆರೆಯುತ್ತಿದ್ದಂತೆ, ಹಿಂದಿನದ್ದನ್ನು ಕಳೆದುಕೊಳ್ಳದಂತೆ ಖಚಿತಪಡಿಸುವುದಕ್ಕಾಗಿ ನಾವು ಒಂದು ಆಶಯವನ್ನು ಹುಟ್ಟುಹಾಕಿದ್ದೇವೆ. ಅದಕ್ಕಾಗಿ ನಾವು ನಮ್ಮ ಸ್ಥಳೀಯ ಪರಿಸರದಲ್ಲಿನ 4 ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದ್ದೆವೆ.

I

ಪರಿಸರ ಸಂರಕ್ಷಣೆ

ನಮ್ಮ ಪರಿಸರದ ರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯ ಏಕೆಂದರೆ ಜೊತೆಗೂಡಿ ಮಾಡುವ ಕಾರ್ಯವು ಹೆಚ್ಚು ಪ್ರಭಾವ ಬೀರುತ್ತದೆ. ನಮ್ಮ ಭೂಮಿಯ ಸಣ್ಣ ಮೂಲೆಯನ್ನು ಸ್ವಚ್ಛವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳುವುದು ಒಂದು ಸವಾಲಿನ ಕೆಲಸವಾದರೂ ಕೂಡ – ಇಂತಹ ಸಣ್ಣ ಸಣ್ಣ ಪ್ರಯತ್ನಗಳು ಕೂಡಿ ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ನಮ್ಮ ಮುಂದಿನ ಪೀಳಿಗೆಯು ಭವಿಷ್ಯದ ದಿನಗಳಲ್ಲಿ ತಾಜಾ ಗಾಳಿಯನ್ನು ಉಸಿರಾಡಲು ಸಾಧ್ಯವಾಗಲು, ನಾವು ಹಸಿರಿನಿಂದ ಕೂಡಿದ ಪರಿಸರಕ್ಕಾಗಿ ಉಪಕ್ರಮಗಳು, ನೈರ್ಮಲ್ಯದ ಚಟುವಟಿಕೆಗಳು ಮತ್ತು ಮರಗಳನ್ನು ನೆಡುವುದರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದೇವೆ.

ನೀವು ಜನರನ್ನು ನೈಸರ್ಗಿಕ ಪರಿಸರದ ಕುರಿತು ಕಾಳಜಿವಹಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ, ಆದರೆ ನೀವು ಅವರನ್ನು ಪರಿಸರದೊಂದಿಗೆ ಬಾಂಧವ್ಯ ಬೆಳೆಸಲು ಪ್ರೋತ್ಸಾಹಿಸಿದರೆ, ಅವರು ಸಹಜವಾಗಿ ಕಾಳಜಿವಹಿಸಬಹುದು.

ಸಾಂಸ್ಕೃತಿಕ ಪುನರುಜ್ಜೀವನ

ನಮ್ಮ ಪ್ರಾಂತ್ಯವು ಯಕ್ಷಗಾನ ಗೊಂಬೆಯಾಟ, ಹುಲಿವೇಷ ಕುಣಿತ, ಕೋಲದಂತಹ ಹಲವಾರು ಅನನ್ಯ ಸಾಂಸ್ಕೃತಿಕ ಕಲೆಗಳನ್ನು ಹೊಂದಿದೆ. ಅನೇಕ ತಲೆಮಾರುಗಳಿಂದಲೂ ಈ ಪರಂಪರೆಗಳನ್ನು ಮಂದುವರಿಸಿಕೊಂಡು ಬರಲಾಗಿದೆ. ಆದರೆ ಇಂದಿನ ದಿನಗಳಲ್ಲಿ ಕಲಾವಿದರಿಗೆ ಅದನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದ್ದಂತೆ ಈ ಕಲಾಪ್ರಕಾರಗಳು ಕಣ್ಮರೆಯಾಗುತ್ತಿವೆ. ಇಂತಹ ಕಲಾವಿದರನ್ನು ಸಬಲೀಕರಿಸುವುದೇ ನಮ್ಮ ಗುರಿಯಾಗಿದೆ. ಇದರಿಂದ ನಮ್ಮ ಸಂಸ್ಕೃತಿಯು ಮುಂದಿನ ಪೀಳಿಗೆಗೆ ಆಳವಾಗಿ ನೆಲೆಯೂರಲು ಸಾಧ್ಯವಿದೆ.

ನಾವು ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾದರೆ, ನಾವು ಅದನ್ನು ಪೋಷಿಸಿಕೊಂಡು ಹೋಗುವುದನ್ನು ಮುಂದುವರಿಸಬೇಕಾಗುತ್ತದೆ.

ಶಿಕ್ಷಣ

ರಾಷ್ಟ್ರೀಯ ಶಿಕ್ಷಣ ನೀತಿ 2000 ದ ಪ್ರಕಾರ, ಕನಿಷ್ಠ 5 ನೇ ತರಗತಿಯವರೆಗೆ ಮತ್ತು ಸಾಧ್ಯವಾದಲ್ಲಿ ಗ್ರೇಡ್ 8 ರವರೆಗಿನ ಶಿಕ್ಷಣ ಮಾಧ್ಯಮವು ನಮ್ಮ ಪ್ರಾದೇಶಿಕ ಭಾಷೆಯಲ್ಲಿರಬೇಕು. ಆದರೆ, ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಲ್ಲಿಯೇ ಕಲಿಯಬೇಕು ಎಂಬ ಜನಸಾಮಾನ್ಯರ ಸಹಜವಾದ ನಂಬಿಕೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆ. ಸ್ಥಳೀಯ ಶಾಲೆಗಳಿಗೆ ಮೂಲಸೌಕರ್ಯ ಮತ್ತು ಸವಲತ್ತುಗಳನ್ನು ಒದಗಿಸಿಕೊಡುವುದರ ಮೂಲಕ ಅವುಗಳನ್ನು ಬೆಂಬಲಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಪ್ರಪಂಚವನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧವೇ ಶಿಕ್ಷಣ.

ಸಮುದಾಯದ ಸೇವೆ

ಉಡುಪಿಯು ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವಂತಹ ಅನೇಕ ಸಾಂಸ್ಕೃತಿಕ ಮತ್ತು ಅನನ್ಯ ಸ್ಮಾರಕಗಳ ತವರೂರಾಗಿದೆ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದಾಗಿ ಅವುಗಳನ್ನು ಜೀರ್ಣೋದ್ಧಾರಗೊಳಿಸಬೇಕಾಗಿದೆ. ಸ್ಥಳೀಯ ಸ್ಮಾರಕಗಳನ್ನು ಪುನರ್ನಿರ್ಮಿಸಲು ಮತ್ತು ಜೀರ್ಣೋದ್ಧಾರಗೊಳಿಸಲು ನಾವು ಸ್ಥಳೀಯ ಗುಂಪುಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದೇವೆ. ಮಾತ್ರವಲ್ಲದೇ, ಈ ಪ್ರಾಂತ್ಯದಲ್ಲಿ ಆರೋಗ್ಯ ಕಾಳಜಿ , ಕ್ರೀಡೆ ಮತ್ತು ಮಹಿಳಾ ಕಲ್ಯಾಣಕ್ಕೂ ಇದೇ ರೀತಿಯ ಬೆಂಬಲವನ್ನು ಸಹ ನೀಡುತ್ತಿದ್ದೇವೆ.

ನಾವು ಬದುಕಲು ಸಮಾಜದಿಂದ ಹೇಗೆ ಪಡೆಯುತ್ತೇವೋ, ಒಂದು ಬದುಕನ್ನು ಕಟ್ಟಿಕೊಡಲು ನಾವು ಸಮಾಜಕ್ಕೆ ಹಿಂದಿರುಗಿಸುವುದು ಸಹ ಅಗತ್ಯ.